Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ಸಹ ಸಂಘಟನೆಗಳು
  • ಯುಎಇ ಪದ್ಮಶಾಲಿ ಸಮುದಾಯ
  • ದುಬೈ
  • ಸಹ ಸಂಘಟನೆಗಳು

ಯುಎಇ ಪದ್ಮಶಾಲಿ ಸಮುದಾಯ

padmashali January 1, 2025 1 minute read
Dubai-2
Share with your family and friends

Loading

ಗಲ್ಫ್ ರಾಷ್ಟçದಲ್ಲಿ ಯುಎಇ ಪದ್ಮಶಾಲಿ ಸಮುದಾಯದ ಕ್ರಾಂತಿಕಾರಿ ಹೆಜ್ಜೆಗಳು….

ಯುಎಇ ಪದ್ಮಶಾಲಿ ಸಮುದಾಯದ ಹುಟ್ಟು ಆಕಸ್ಮಿಕ. 2010ರ ಮೇ ತಿಂಗಳಿನಲ್ಲಿ ಪರಸ್ಪರ ಪರಿಚಯವಿರುವ ಕೆಲವೇ ಪದ್ಮಶಾಲಿಗರು
ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ ಇವರ ನಿವಾಸದಲ್ಲಿ ಒಟ್ಟುಗೂಡಿದಾಗ ತಮ್ಮ ಸಂಭಾಷಣೆಯ ಮಧ್ಯೆ ನಾವು ಕೂಡ ಏಕೆ ಒಂದು ಸಂಘಟನೆಯನ್ನು ಆರAಭಿಸಬಾರದೆAಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತು. ಸರ್ವರ ಬಯಕೆಯಂತೆ ಚಿಂತನ-ಮAಥನ ಮಾಡಿದ ಮೇಲೆ 2010 ಜೂನ್ ತಿಂಗಳ 18ರAದೇ ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ ಇವರ ನೇತೃತ್ವದಲ್ಲಿ ಅವರ ಮನೆಯನ್ನೆ ಉದ್ಘಾಟನೆಯ ಸ್ಥಳವಾಗಿರಿಸಿ ಹಲವು ಪದ್ಮಶಾಲಿ ಬಾಂಧವರು ಮತ್ತು ಸಮಾಜದ ನಿಕಟವರ್ತಿ ಗಣ್ಯರ ಸಮಕ್ಷಮದಲ್ಲಿ ಯುಎಇ ಪದ್ಮಶಾಲಿ ಸಮುದಾಯವನ್ನು ಅಧಿಕೃತವಾಗಿ ಆರಂಭಿಸಲಾಯಿತು.


ಆರAಭದ ದಿನಗಳಲ್ಲಿ ಪದ್ಮಶಾಲಿ ಸದಸ್ಯತಾ ಅಭಿಯಾನದ ಮುಖೇನ ಯುಎಇಯ ಉದ್ದಗಲಕ್ಕೂ ವಾಸಿಸುತ್ತಿರುವ ಸ್ವಜಾತಿಬಾಂಧವರನ್ನು ಗುರುತಿಸಿ ಸಂಘಟನೆಗೆ ಸೇರಿಸಲಾಯಿತು. ಸಂಘಟನೆ ಅಧಿಕೃತ ಚಾಲನೆಯ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆಯನ್ನು ದುಬಾಯಿಯಲ್ಲಿ ಬಹಳ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ದ್ವಿತೀಯ ವಾರ್ಷಿಕೋತ್ಸವವನ್ನು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಹರಿಕಥಾ ಕಾಲಕ್ಷೇಪಗಳ ಮೂಲಕ ಭಕ್ತಿಪ್ರಧಾನವಾಗಿ ಆಯೋಜಿಸಲಾಯಿತು. ಪದ್ಮಶಾಲಿ ಸಮಾಜದ ಹಿರಿಯ ಮುತ್ಸದ್ಧಿ ಕವಿ ಮತ್ತು ಶ್ರೇಷ್ಠ ಹರಿಕೀರ್ತನಕಾರರಾದ ಶ್ರೀ ಅಂಬಾತನಯ ಮುದ್ರಾಡಿಯವರಿಂದ ಹರಿಕೀರ್ತನೆಯನ್ನು ಆಲಿಸಿ ಪುನೀತರಾದ ಪದ್ಮಶಾಲಿಗರು ವಿಶೇಷ ಸಾಧನೆಗಾಗಿ ಅವರನ್ನು ಗೌರವಿಸಿ “ಜ್ಞಾನರ್ಷಿ” ಬಿರುದನ್ನಿತ್ತು ಸನ್ಮಾನಿಸಿ ಕೃತಾರ್ಥರಾದರು.

ಮೂರನೆಯ ವಾರ್ಷಿಕೋತ್ಸವವೂ ದುಬೈಯಲ್ಲಿ ಜರಗಿದ್ದು ಹಿಂದಿನ ವರ್ಷಗಳಲ್ಲಿ ಹಮ್ಮಿಕೊಂಡ ಕಾರ್ಯಚಟುವಟಿಕೆಗಳ ಸಂಪೂರ್ಣ
ಮಾಹಿತಿಯನ್ನು ಬಾಂಧವರೆದುರು ಪ್ರಸ್ತುತಪಡಿಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸೌಹಾರ್ದ ಕೂಟ ಮತ್ತು “ಪದ್ಮಸಂಗಮ” ಸ್ಮರಣ ಸಂಚಿಕೆಯ ಬಿಡುಗಡೆಯನ್ನು 5ನೆಯ ವಾರ್ಷಿಕೋತ್ಸವದಂದು ಏರ್ಪಡಿಸಲಾಯಿತು.


2014ರ ಅಕ್ಟೋಬರಿನಲ್ಲಿ ದುಬೈಯ ಇಂಡಿಯಾ ಕ್ಲಬ್ ಸಭಾಂಗಣದಲ್ಲಿ ವೈಭವದಿಂದ ನೆರವೇರಿದ ಕಾರ್ಯಕ್ರಮದಲ್ಲಿ ಊರಿನ ಹಲವು ಗಣ್ಯರು
ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸಿ ಪ್ರಭಾಕರ್ ಶೆಟ್ಟಿಗಾರ್, ಶ್ರೀ ಪ್ರಭಾಶಂಕರ್ ಪದ್ಮಶಾಲಿ ಕಿನ್ನಿಮುಲ್ಕಿ, ಶ್ರೀ ಎಸ್. ಶ್ರೀನಿವಾಸ ಶೆಟ್ಟಿಗಾರ್ ಮಂಗಳೂರು ಮತ್ತು ಶ್ರೀಮತಿ ಲೀಲಾವತಿ ಕೇಶವ ಶೆಟ್ಟಿಗಾರ್‌ರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಕ್ರಿಯವಾಗಿರುವ ಇತರ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಗೌರವಿಸಲಾಯಿತು.


2015ರಲ್ಲಿ ಆಯೋಜಿಸಿರುವ ಶ್ರೀ ಸತ್ಯನಾರಾಯಣ ಪೂಜಾ ಕೈಂಕರ್ಯವನ್ನು ಮತ್ತು ಕಥಾ ಪಾರಾಯಣವನ್ನು ಖ್ಯಾತ ಯಕ್ಷಗಾನ
ಕಲಾವಿದ, ಪ್ರಸಂಗಕರ್ತ, ವಾಸ್ತುತಜ್ಞ ಮತ್ತು ಜ್ಯೋತಿಷಿ ಶ್ರೀ ಬಸವರಾಜ್ ಶೆಟ್ಟಿಗಾರ್ ನೆರವೇರಿಸಿಕೊಟ್ಟರು.


2016ರಲ್ಲಿಯ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಅಂದಿನ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ
ಅಧ್ಯಕ್ಷರಾಗಿದ್ದ ಶ್ರೀ ಪುರಂದರ ಡಿ. ಶೆಟ್ಟಿಗಾರ್ ಪಾಲ್ಗೊಂಡಿದ್ದರು.ದಶಮಾನೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನಳದಮಯಂತಿ ಯಕ್ಷಗಾನ ತಾಳಮದಲೆಯನ್ನು 2019ರ ಅಕ್ಟೋಬರ್ ತಿಂಗಳಿನಲ್ಲಿ ಬಹಳ ಅದ್ದೂರಿಯಿಂದ ಮತ್ತು ಭಕ್ತಿಶ್ರದ್ಧೆಗಳಿಂದ ಆಯೋಜಿಸಲಾಯಿತು. ದುಬಾಯಿಯ ಬಿಲ್ವ ಸ್ಕೂಲ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಪೂಜೆಯು ಶ್ರೀ ಹರಿಪ್ರಸಾದ್ ತಂತ್ರಿಯವರ ಪೌರೋಹಿತ್ಯದಲ್ಲಿ ಜರಗಿತು. ಪೂಜೆ ಸಂಪನ್ನವಾದ ಬಳಿಕ ಯಕ್ಷಗಾನ ತಾಳಮದ್ದಳೆ “ನಳದಮಯಂತೀ”ಯನ್ನು ಆರಂಭಿಸಲಾಯಿತು. ವಿಶೇಷ ಆಹ್ವಾನಿತರಾಗಿ ಹಿಮ್ಮೇಳದಲ್ಲಿ ಯಕ್ಷದ್ರುವ ಶ್ರೀ ಸತೀಶ ಶೆಟ್ಟಿ ಪಟ್ಲ, ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾದ ಶ್ರೀ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಟಣ ಇವರುಗಳು ಭಾಗವತಿಕೆಯಲ್ಲಿ ಮತ್ತು ಶ್ರೀ ದಯಾನಂದ ಶೆಟ್ಟಿಗಾರ್ ಚಂಡೆಮದ್ದಳೆಯಲ್ಲಿ ಸಹಕರಿಸಿದರೆ ಪ್ರಮುಖ ಪಾತ್ರದಲ್ಲಿ ಕಲಾವಿದರಾದ ಶ್ರೀ ದಿನೇಶ ಶೆಟ್ಟಿಗಾರ್ ಕೊಡಪದವು, ಶ್ರೀ ಮುರಳೀಧರ ಶೆಟ್ಟಿಗಾರ ಕನ್ನಡಿಕಟ್ಟೆ ಮತ್ತು ಶ್ರೀ ಸದಾಶಿವ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಭಾಗವಹಿಸಿದ್ದರು. ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಗುರುಗಳಾದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಹಾಗೂ ಕಲಾವಿದರಾದ ಬಾಲಕೃಷ್ಣ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀ ಸತೀಶ ಶೆಟ್ಟಿಗಾರ್ ವಿಟ್ಲ, ಶ್ರೀ ಗಿರೀಶ್ ನಾರಾಯಣ ಕಾಟಿಪಳ್ಳ ಶ್ರೀ ಸಮಂತ ಗಿರೀಶ್ ವಿಶೇಷ ಪಾತ್ರಗಳಲ್ಲಿ ಮಿಂಚಿದ ಯಕ್ಷಗಾನ ತಾಳಮದ್ದಳೆ ಬಹಳ ಸೊಗಸಾಗಿ ಮೂಡಿಬಂತು.

ಹೀಗೆ ಯುಎಇ ಪದ್ಮಶಾಲಿ ಸಮುದಾಯವು ತನ್ನ ಬಾಳ್ವೆಯ ಹನ್ನೆರಡು ಸಂವತ್ಸರಗಳಲ್ಲಿ ರಕ್ತದಾನ ಶಿಬಿರ, ಪ್ರತಿ ತಿಂಗಳು ತಪ್ಪದೆ ಭಜನೆ, ಎಲ್ಲ ಹಬ್ಬ ಹರಿದಿನಗಳ ಆಚರಣೆ ಮತ್ತು ಯುಎಇಯಲ್ಲಿ ಉದ್ಯೋಗ ಅರಿಸಿ ಬಂದವರಿಗೆ ಸಹಾಯ ಹಸ್ತ, ಪದ್ಮಶಾಲಿ ಬಡವಿದ್ಯಾರ್ಥಿಗಳಿಗೆ ಶಿಷ್ಯವೇತನ, ಅನಾರೋಗ್ಯದಿಂದಿರುವ ಬಡ ಕುಟುಂಬಗಳಿಗೆ ಹಣಕಾಸಿನ ನೆರವು ಇತ್ಯಾದಿ ಜನಪರ ಕಾರ್ಯಕ್ರಮಗಳಿಂದ ಸಹಬಾಳ್ವೆಯ
ಅರಿವನ್ನು ಜಾಗೃತಗೊಳಿಸುವಲ್ಲಿ ಸಫಲವಾಯಿತು.

About the Author

padmashali

Administrator

View All Posts

Post navigation

Previous: ದ.ಕ ಪದ್ಮಶಾಲಿ ಸಮಾಜ ಸೇವಾ ಕೂಟ (ರಿ) ಬೆಂಗಳೂರು
Next: ಸ್ವಸಮಾಜದ ಹದಿನಾರು ದೇವಸ್ಥಾನಗಳಲ್ಲಿ ಏಕರೂಪ ವಿವಾಹ

Related Stories

Dubai-Bhajane
  • News
  • ದುಬೈ

ವಿಂಶತಿ ಭಜನಾಟ್ಯ ಸಂಭ್ರಮ 2025ರಲ್ಲಿ ದುಬೈಯ ಪದ್ಮಶಾಲಿ ಭಜನಾ ತಂಡ

padmashali March 11, 2025
congrats
  • News
  • ದುಬೈ

“ಜಾನಪದ ಲೋಕ” ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಯುತ ಶೇಖರ್ ಡಿ ಶೆಟ್ಟಿಗಾರರಿಗೆ ಅಭಿನಂದನೆಗಳು

padmashali January 25, 2025
Bhajana-1
  • News
  • ದುಬೈ
  • ಧಾರ್ಮಿಕ ವೇದಿಕೆ

ನಾರಾಯಣ ಸೇವಾ ಸಮಿತಿಯ ಆಶ್ರಯದಲ್ಲಿ ದುಬೈನಲ್ಲಿ ಆಯೋಜಿತ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಪದ್ಮಶಾಲಿ ಸಮುದಾಯ ದುಬೈ

padmashali January 16, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.