![]()
ಹರ್ಷ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ನವೀನವಾಗಿ ನಿರ್ಮಿಸಲಾಗುವ ಸಭಾಭವನ ಸಮುಚ್ಚಯದ ಭೂಮಿ ಪೂಜ ಮತ್ತು ಶಿಲಾನ್ಯಾಸ ಧಾರ್ಮಿಕ ವಿಧಿಗಳು ದಿನಾಂಕ 18 4 2025 ರಂದು ಅಶೋಕ್ ಪುರೋಹಿತ್ ರವರ ಪೌರೋಹಿತ್ಯದಲ್ಲಿ ವಿಧಿ ಬದ್ಧವಾಗಿ ನೆರವೇರಿದವು

ಹರ್ಷ ಫೌಂಡೇಶನ್ ನ ಮುಖ್ಯ ಟ್ರಸ್ಟಿಗಳಾದ ಕೃಷ್ಣಾನಂದ ಶೆಟ್ಟಿಗಾರ್ ಶೆಟ್ಟಿಗಾರ್ ದಂಪತಿಗಳು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ,ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೊಡಿಯಾಲ ಬೈಲ್, ಬೆಂಗಳೂರು ಪದ್ಮಶಾಲಿ ಸಮಾಜ ಸೇವಾಕೂಟದ ಅಧ್ಯಕ್ಷರಾದ ಭಾನುಮತಿ ಶೆಟ್ಟಿಗಾರ್ ಮತ್ತು ಮುಂಬೈ ಪದ್ಮಶಾಲಿ ಸೇವಾ ಸಂಘದ ಅಧ್ಯಕ್ಷರಾದ ಉತ್ತಮ ಶೆಟ್ಟಿಗಾರ್ ರವರು ಮತ್ತು ಮುಂಬೈ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಬಿ ರಾಮಚಂದ್ರ ಶೆಟ್ಟಿಗಾರ್ ಶಿಲಾನ್ಯಾಸ ನೆರವೇರಿಸಿದರು.

ಕೃಷ್ಣಾನಂದ ಶೆಟ್ಟಿಗಾರರು ಮಾತನಾಡಿ ಮುಂಬೈಯಲ್ಲಿ ತಾನು ಕೈಗೊಂಡ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸಿ ಹುಟ್ಟೂರಿನಲ್ಲೂ ಸಮಾಜಕ್ಕೆ ಉಪಯೋಗವಾಗುವ ಕಾರ್ಯವನ್ನು ಮಾಡಬೇಕೆಂಬ ಹಂಬಲವೇ ಈ ಯೋಜನೆಗೆ ಪ್ರೇರಣೆಯೆಂದು ತಿಳಿಸಿದರು.
ಸಮಾಜ ಬಂಧುಗಳೆಲ್ಲರೂ ಒಂದೆಡೆ ಸೇರಿ ಸಮಗ್ರತೆಯನ್ನು ಮತ್ತು ಏಕತೆಯನ್ನು ಮೆರೆಸಲು ಈ ಯೋಜನೆ ಪರ್ಯಾಪ್ತವಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಯೋಜನೆಗೆ ಸಂಬಂಧಿಸಿದ ಕಾನೂನಿನ ಪ್ರಕ್ರಿಯೆಗಳು ಸಾಗುತ್ತಿದ್ದು ಅತಿ ಶೀಘ್ರದಲ್ಲಿ ಪೂರ್ತಿಯಾಗುವ ವಿಶ್ವಾಸವಿದೆಯೆಂದು ನುಡಿದರು. ಈ ಯೋಜನೆಗೆ ಬೆಂಬಲವಾದ ಎಲ್ಲ ಸಹೃದಯರನ್ನು ವಂದಿಸಿದರು.
ವಸತಿ ಸಮುಚ್ಚಯದ ವಿನ್ಯಾಸಕಾರರಾದ ಭಗವಾನ್ ದಾಸ್ ಶೆಟ್ಟಿಗಾರರು ನಿರ್ಮಾಣವಾಗಲಿರುವ ಸಮುಚ್ಚಯದಲ್ಲಿ ಒಳಗೊಳ್ಳಲಿರುವ ಸಭಾಭವನ ,ಭೋಜನಾಲಯ ,ವಾಸದ ಕೋಣೆಗಳು ಮತ್ತು ವಾಣಿಜ್ಯ ಸ್ಥಾನಗಳ ವಿವರವನ್ನು ನೀಡಿದರು. ಕೃಷ್ಣಾನಂದ ಶೆಟ್ಟಿಗಾರ್ ಶ್ರೀಮತಿ ಕಾಂತಿ ಶೆಟ್ಟಿಗಾರ ದಂಪತಿಗಳು ಮತ್ತು ಪುತ್ರರು ಸಮಾಜ ಬಂಧುಗಳನ್ನು ಸ್ವಾಗತಿಸಿ ಉಪಚರಿಸಿದರು.

ಹರ್ಷ ಫೌಂಡೇಶನ್ ನ ಕೃಷ್ಣಾನಂದ ದಂಪತಿಗಳ ಈ ಸಮಾಜ ಸೇವಾ ಯೋಜನೆ ನಿರ್ವಿಘ್ನವಾಗಿ ನೆರವೇರಲಿ ಎಂದು ಕುಲದೇವರಲ್ಲಿ ಪ್ರಾರ್ಥಿಸುತ್ತೇವೆ.
ಸಗ್ರಿಮತಿ ಲಲಿತ ಮತ್ತು ಬಿ . ವಿಠ್ಠಲ ಶೆಟ್ಟಿಗಾರ್
ಫೆರಂಪಳ್ಳಿ, ಉಡುಪಿ