Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ಸೃಜನಶೀಲತೆ
  • ಲೇಖನಗಳು
  • ಉತ್ತರಾಯಣ ಪುಣ್ಯ ಕಾಲದ ಆರಂಭ – ಮಕರ ಸಂಕ್ರಾಂತಿ
  • News
  • ಲೇಖನಗಳು
  • ಸೃಜನಶೀಲತೆ

ಉತ್ತರಾಯಣ ಪುಣ್ಯ ಕಾಲದ ಆರಂಭ – ಮಕರ ಸಂಕ್ರಾಂತಿ

padmashali January 15, 2025 1 minute read
Sankranti
Share with your family and friends

Loading

ಬಂದಿದೆ ಬಂದಿದೆ ಬಂದಿದೆ ನೋಡಿರಿ
ಶುಭವನು ಕೋರುವ ಸಂಕ್ರಾಂತಿ |
ಬಂದಿದೆ ಬಂದಿದೆ ಬಂದಿದೆ ನೋಡಿರಿ
ಅಭಯವ ನೀಡುವ ಸಂಕ್ರಾಂತಿ |

ತನ್ನ ಕಕ್ಷೆಯನ್ನು ಬದಲಿಸುವ ಬೆಳಕಿನೊಡೆಯ ನೇಸರನನ್ನು ಪೂಜಿಸುವ ದಿನ‌ ‘ ಮಕರ ಸಂಕ್ರಾಂತಿ* . ಸೂರ್ಯನಿಗೆ ಚಲನೆಯಿಲ್ಲ. ನಾವು ವಾಸಿಸುವ ವಸುಧೆ ಸೂರ್ಯನನ್ನು ಸುತ್ತು ಬರುವುದರಿಂದ ನಮಗೆ ಸೂರ್ಯ ಚಲಿಸಿದಂತೆ ಕಾಣಿಸುವ. ಮಕರ ಸಂಕ್ರಾಂತಿ ವೃತ್ತದ ಮೇಲೆ ಸೂರ್ಯನ ನೇರ ಕಿರಣಗಳು ಬೀಳುವ ದಿನವಿದು. ಹಿಂದೂ ಸಂಸ್ಕೃತಿಯಂತೆ ದೇಶದೆಲ್ಲೆಡೆ ಈ ದಿನಕ್ಕೆ ವಿಶೇಷ ಮಹತ್ವವಿದೆ.

ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹತ್ತನೇ ಮಾಸ ಮಕರ ಆರಂಭವಾಗುವ ಶುಭ ದಿನ . ದಕ್ಷಿಣಾಯಣ ಮುಗಿದು ಉತ್ತಾರಯಣದ ಆರಂಭ.

ರಾಶಿಯ ಬದಲಿಸಿ ತೋಷದಿ ಮಕರಕೆ
ನೇಸರ ಹೊಗ್ಗುವ ಸಂಕ್ರಾಂತಿ |
ಹಾಸವ ಬೀರುತ ಸಾಸಿರ ಬೆಳೆಗಳು
ಬೇಸರ ನೀಗುವ ಸಂಕ್ರಾಂತಿ |

ಉತ್ತರಾಯಣ ಎನ್ನುವುದು ಜನವರಿ ಹದಿನಾಲ್ಕರಿಂದ ಆರಂಭವಾಗಿ ಮುಂದಿನ ಆರು ತಿಂಗಳ ಕಾಲ ಇರುವ ಸಮಯ. ಈ ಆರು ತಿಂಗಳು ಸ್ವರ್ಗದ ಬಾಗಿಲು ತೆರೆದಿರುವುದೆಂಬ ವಿಶೇಷ ನಂಬಿಕೆ ನಮ್ಮಲ್ಲಿ. ಇದೊಂದು ಪುಣ್ಯ ಕಾಲ. ಮಹಾಭಾರತ ಯುದ್ಧ ಕಾಲದಲ್ಲಿ ಬಾಣಗಳ ಹಾಸಿಗೆ ಮೇಲಿದ್ದ ಶಂತನು – ಗಂಗೆಯ ಪುತ್ರ ಬೀಷ್ಮ ಪಿತಾಮಹರು ಉತ್ತರಾಯಣ ಆರಂಭವಾಗುವ ಈ ದಿನವನ್ನು ಕಾದಿದ್ದರಂತೆ ತನ್ನ ಕೊನೆಯುಸಿರೆಳೆಯಲು. ಅವರಿಗೆ ಇಚ್ಛಾಮರಣದ ವರವಿದ್ದುದ್ದು ಅವರ ಅಂತಿಮ ಇಚ್ಛೆ ಈಡೇರಿಸಿತ್ತು.

ಖಗ ಮೃಗ ನಲಿದಿವೆ ಭಗನಿಗೆ ವಂದಿಸಿ
ಸೊಗವನು ತಂದಿದೆ ಸಂಕ್ರಾಂತಿ |
ತೊಗಲನು ರಕ್ಷಿಸಿ ಮೊಗದಲಿ ಕಂಡಿಹ
ದುಗುಡವ ಕಳೆದಿದೆ ಸಂಕ್ರಾಂತಿ |

ಕಬ್ಬು ,ಗೆಣಸು ,ನೆಲಗಡಲೆ ,ಎಳ್ಳು , ಅವರೆ ,ಬಟಾಣಿ ,ಹುರುಳಿ ,ಹುರಿಗಡಲೆ ಇತ್ಯಾದಿ ಬೆಳೆಗಳು ಸಮೃದ್ಧವಾಗಿ ಬೆಳೆಯುವ ಕಾಲ ಇದು.
ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟುವುದು , ಒಣೆಯುವುದು ಸಾಮಾನ್ಯ , ದೇಹದ ತಾಪಮಾನ ಕಡಿಮೆ ಆಗುವುದು. ದೇಹವನ್ನು ಬಿಸಿಯಾಗಿಡಲು ,ಆರೋಗ್ಯ ಸಮಸ್ಯೆಗಳನ್ನು ತಡೆಯಲು ದಿವ್ಯೌಷಧಗಳು ಆ ಕಾಲದಲ್ಲಿ ಬೆಳೆಯಲ್ಪಡುವ ಆಹಾರ ಧಾನ್ಯಗಳು ,ಗಡ್ಡೆಗೆಣಸುಗಳು ,ಕಬ್ಬು ಮುಂತಾದವು.ಕೆಲವನ್ನು ಬೇಯಿಸಿ ,ಕೆಲವನ್ನು ಹಸಿಯಾಗಿ ತಿನ್ನುವರು. ಕಸ ಕಡ್ಡಿ ಧಾನ್ಯದ ಜೊಳ್ಳಿಗೆ ಕಿಚ್ಚು ಹಾಕುವ ಪದ್ಧತಿ ಇದೆ.‌

ಮನೆಯೆದುರು ಮಾತ್ರವೇ ಅಲ್ಲ ಕೆಲವೆಡೆ ಜನರು ತಾವು ವಾಸಿಸುವ ಬೀದಿಯುದ್ದಕ್ಕೂ ತಳಿರು – ತೋರಣ ಕಟ್ಟಿ ಶೃಂಗರಿಸುವ ,ರಂಗೋಲಿ ಬರೆಯುವ ಪದ್ಧತಿ ಇದೆ. ಎಳ್ಳು – ಬೆಲ್ಲ – ಕಬ್ಬು ,ಹುರಿಗಡಲೆ ಇತ್ಯಾದಿಗಳನ್ನು ಮನೆ ಮನೆಗೆ ಹೋಗಿ ಹಂಚಿ ” ಎಳ್ಳು ಬೆಲ್ಲ ತಿನ್ನಿ ಒಳ್ಳೊಳ್ಳೆ ಮಾತಾಡಿ ” ಎಂದು ಪರಸ್ಪರ ಶುಭಾಶಯ ಕೋರುವವರೂ ಇದ್ದಾರೆ.

ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೊಂಗಲ್” ಎಂದು ಕರೆಯುವರು. ಪೊಂಗಲ್ ಎನ್ನುವುದು ಹೆಸರು ಬೇಳೆ,ಬೆಲ್ಲ , ತೆಂಗಿನಕಾಯಿ , ಗೇರು ಬೀಜ- ಒಣ ದ್ರಾಕ್ಷಿ ಹಾಕಿ ತಯಾರಿಸುವ ಸಿಹಿ ಖಿಚಡಿ. ನಮ್ಮ ರಾಜ್ಯದ ಕರಾವಳಿಯಲ್ಲಿ ಮೊದಲಿಂದಲೂ ಸಿಹಿ ಖಿಚಡಿ ಮಾಡುವ ಸಂಪ್ರದಾಯವಿದೆ. ಗುಜರಾತ್ – ಮಹಾರಾಷ್ಟ್ರದಲ್ಲಿ ಮೊದಲಿಂದ ಈ ದಿನ ಗಾಳಿಪಟ ಹಾರಿಸುವ ಪದ್ಧತಿ ಇದೆ. ಈ ಪದ್ಧತಿ ಇಂದು ದೇಶದೆಲ್ಲೆಡೆ ಪಸರಿಸಿರುವುದು ವಿಶೇಷ..

‘ಲೋಹರಿ’ ಎಂದು ಪಂಜಾಬ – ಹರಿಯಾಣದಲ್ಲಿ ಕರೆಯಲ್ಪಡುವ ಈ ದಿನ ಕೇರಳದಲ್ಲಿ ಇನ್ನೂ ವಿಶೇಷ. ‘ ಮಕರ ವಿಳಕ್ಕು* ದರ್ಶನ ಅಯ್ಯಪ್ಪ ಸ್ವಾಮಿಯ ಭಕ್ತಾಧಿಗಳಿಗೆ. ಶ್ರದ್ಧೆಯಿಂದ – ಭಕ್ತಿಯಿಂದ ಹಲವು ದಿನಗಳ ವ್ರತಗಳನ್ನು ಹಿಡಿದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಭಕ್ತಾದಿಗಳು ಅಗಣಿತ. ವರ್ಷ ಪೂರ್ತಿ ಅಯ್ಯಪ್ಪನ ದರ್ಶನಕ್ಕೆ ಹೋಗುವವರಿದ್ದರೂ ಚಳಿಗಾಲದ ಮೂರ್ನಾಲ್ಕು ತಿಂಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಹೆಚ್ಚು.

ಭಾಸುರರಂತಿಹ ರಾಸುಗಳೆಲ್ಲವ
ತೋಷದಿ ಪೂಜಿಪ ಸಂಕ್ರಾಂತಿ |
ರೋಷವ ತೊರೆದರೆ ಕಾಸಿನ ಸುರಿಮಳೆ
ಆಸರೆ ನೀಡುವ ಸಂಕ್ರಾಂತಿ |

ಕೃಷಿ ಕಾರ್ಯದಲ್ಲಿ ನಿರಂತರ ನೆರವು ನೀಡುವ ರಾಸುಗಳನ್ನು ಮರೆಯಲಾಗದು. ತೈಲ ಮಜ್ಜನ ಮಾಡಿಸಿ ,ಸಿಂಗರಿಸಿ ,ವಿಶೇಷ ಖಾದ್ಯಗಳನ್ನು ಬಡಿಸಿ ,ಆರತಿಯೆತ್ತಿ ಸಂಭ್ರಮಿಸುವರು.
ಕೆಲವೆಡೆ ಎತ್ತುಗಳ ಕಾಳಗ ,ಓಟದ ಸ್ಪರ್ಧೆಯಿದ್ದರೂ ಅವುಗಳು ಅನುಭವಿಸುವ ನೋವು ಕಣ್ಣಂಚಿನಲ್ಲಿ ನೀರು ತರಿಸುವುದು. ಅಂತಹ ಆಚರಣೆಗೆ ಕಡಿವಾಣ ಹಾಕುವುದು ಉತ್ತಮ. ನಮ್ಮ ಕಂಬಳ ಇದಕ್ಕಿಂತ ಭಿನ್ನ.. ಹಾಗಾಗಿ ಕಂಬಳದ ಬಗ್ಗೆ ಹೆಮ್ಮೆಯಿದೆ. ಉತ್ತರಾಯಣ ಆರಂಭ ಕಾಲದಲ್ಲಿ ರಾಸುಗಳಿಗೆ ಒಂದಿಷ್ಟು ವಿಶ್ರಾಂತಿ ಸಿಗುವುದು. ಇದು ಬಹಳ ಒಳ್ಳೆಯ ಚಿಂತನೆ. ಬೇಸಿಗೆ ಆರಂಭವಾಗುವ ಸಮಯ ರಾಸುಗಳಿಗೆ ವಿಶ್ರಾಂತಿ ಬೇಕೇ ಬೇಕು.

ಕರಾವಳಿಯುದ್ದಕ್ಕೂ ದೇಗುಲಗಳಲ್ಲಿ ವಿಶೇಷ ಪೂಜೆ ಈ ದಿನ ಇರುವುದು. ಕುಂದಾಪುರದ ಮಾರಣಕಟ್ಟೆಯಲ್ಲಿ ಮೂರು ದಿನಗಳ ಜಾತ್ರೆ. ಭಕ್ತ ಜನ ಸಾಗರವೇ ಹರಿದು ಬರುವುದು. ಬಾಳೆ ಹಣ್ಣಿನಗೊನೆ ,ಸಿಂಗಾರ ಹೂವು ,ಸೇವಂತಿ ಹೂ ಮಾಲೆ ದೇವರಿಗೆ ಅರ್ಪಿಸುವರು.

ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯ ಖಾದ್ಯ. ಹೋಳಿಗೆ , ಚುಕ್ಕೆ ,ಲಡ್ಡು , ಗೆಣಸಿನ ತಿನಿಸು , ಓಡು ದೋಸೆ ( ಕಪ್ಪರ್ರೋಟಿ). ಓಡು ದೋಸೆ ಮಾಡಿ ಪಾಯಸಕ್ಕೆ ಹಾಕಿ ಸವಿಯುವರು.

ರಾಷ್ಟ್ರೀಯ ಧಾರ್ಮಿಕ ಹಬ್ಬವಿದು. ಈ ದಿನ ರಾಷ್ಟೀಯ ರಜಾ ದಿನವಾಗಿರುವುದು..ಯುಗಾದಿ, ಹೋಳಿ ,ದೀಪಾವಳಿ, ಗಣೇಶ ಚತುರ್ಥಿ, ನವರಾತ್ರಿಯಷ್ಟೇ ಮಹತ್ವ ಮಕರ ಸಂಕ್ರಾಂತಿಗಿದೆ.

ಹಿಂದೂ ಧರ್ಮದ ವಿಶೇಷ ಆಚರಣೆ. ನಮ್ಮೊಳಗೆ ಏಕತೆಯನ್ನು ಮೂಡಿಸಲಿ ಸಂಕ್ರಾಂತಿ. ಧಾರ್ಮಿಕ ಭಾವನೆಗಳನ್ನು ಇನ್ನಷ್ಟು ಬಲಗೊಳಿಸಲಿ ಮಕರ ಸಂಕ್ರಾಂತಿ.

(ನನ್ನ ” ಭಾಮಿ ಪುಟ್ಟಿ” ಎನ್ನುವ ಒಂದು ಸಾವಿರಕ್ಕೂ ಹೆಚ್ಚು ಭಾಮಿನಿ ಷಟ್ಪದಿಗಳಿರುವ ಕಥನ ಕಾವ್ಯದಲ್ಲಿ ‘ ಮಕರ ಸಂಕ್ರಾಂತಿ’ ಹಬ್ಬದ ಬಗ್ಗೆಯೂ ಬಂದಿರುವುದು )

( ಕಂಡಿರುವ ಕೇಳಿರುವ ಒಂದಷ್ಟು ವಿಚಾರಗಳು)

ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ

About the Author

padmashali

Administrator

View All Posts

Post navigation

Previous: ರೈಲ್ವೆ ನೇಮಕಾತಿ 2025 -:- 32,438 ಗ್ರೂಪ್ ಡಿ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಅಹ್ವಾನ
Next: ಪದ್ಮಶಾಲಿ ಯುವ ವೇದಿಕೆ ಬಾಂಧವರಿಗೆ ಪ್ರಥಮ ವರ್ಷದ ಆದಿಶಕ್ತಿ ಟ್ರೋಫಿ – 2025

Related Stories

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.