
ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.), ಮಂಗಳೂರು ಇದರ ಮುಂದಿನ ಕ್ರೀಡೋತ್ಸವದ ಧ್ವಜವನ್ನು ಇಂದು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ, ಮುಲ್ಕಿ-ಮಾನಂಪಾಡಿ ಇದರ ಕಾರ್ಯಕರ್ತರಿಗೆ ಹಸ್ತಾಂತರಿಸಲಾಯಿತು.

ಡಿಸೇಂಬರ್ 22, 2024 ರಂದು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ, ಬಂಗ್ರಮಂಜೇಶ್ವರ ಹೊಸಂಗಡಿ, ಕಾಸರಗೋಡು ಜಿಲ್ಲೆ ಇವರಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಹದಿನಾರು ವೀರಭದ್ರ ದೇವಸ್ಥಾನಗಳ 32ನೆಯ ಪದ್ಮಶಾಲಿ ಕ್ರೀಡೋತ್ಸವ 2024ನ್ನು “ಕರೈ ರುಕ್ಮಣ ಶೆಟ್ಟಿಗಾರ್ ಕ್ರೀಡಾಂಗಣ”, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ, ಕೊಣಾಜೆ ಇಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು

ಇದರೊಂದಿಗೆ ಬಂಗ್ರಮಂಜೇಶ್ವರ ದೇವಸ್ಥಾನದ ಕ್ರೀಡೋತ್ಸವ ಸಮಿತಿಯವರು ಕ್ರೀಡಾಕೂಟದ ಸಂಪೂರ್ಣ ವಿವರಗಳನ್ನೊಳಗೊಂಡ ಪುಸ್ತಕ ವನ್ನು ಮಹಾಸಭಾದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.