Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • News
  • ತೊಂಬತ್ತು ವಸಂತಗಳ ಸಂತೃಪ್ತ ಜೀವನ ಸಾಗಿಸಿದ ಮಾತೆಯರಿಗೆ ನಮನ – ಮಾಲಿಕೆ 2
  • News
  • ತೊಂಬತ್ತು ವಸಂತ

ತೊಂಬತ್ತು ವಸಂತಗಳ ಸಂತೃಪ್ತ ಜೀವನ ಸಾಗಿಸಿದ ಮಾತೆಯರಿಗೆ ನಮನ – ಮಾಲಿಕೆ 2

padmashali January 20, 2025 1 minute read
Mahila-Vedike-90-2
Share with your family and friends

Loading

ತುಂಬಿದ ಕೊಡ ಸುಮತಿ ಈಶ್ವರ ಶೆಟ್ಟಿಗಾರ್

ಇವರು ಬೇರಾರೂ ಅಲ್ಲ ಪ್ರತಿಯೊಬ್ಬರೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡುವ ಶ್ರೀಮತಿ ಹೇಮಲತಾ ಕೆಳಾರ್ಕಳ ಬೆಟ್ಟು ಇವರ ಹಿರಿಯಕ್ಕ ಸುಮತಿ ಕುಕ್ಕಿಕಟ್ಟೆ. 1933 ರ ಅಗಸ್ಟ್ ಹದಿನೆಂಟರಂದು ಉಡುಪಿಯ ಅಲೆವೂರಿನಲ್ಲಿ ಜನಿಸಿದವರು. ಇವರು ಚಿಕ್ಕವರಿರುವಾಗಲೇ ಪಕ್ಕದ ಕುಕ್ಕಿಕಟ್ಟೆಗೆ ಹೆತ್ತವರು ವಾಸ್ತವ್ಯ ಬದಲಾಯಿಸಿದ್ದರು. ಏಳು ಮಕ್ಕಳಲ್ಲಿ ಇವರು ಹಿರಿಯರು. ಈಗವರ ವಯಸ್ಸು 92 ರ ಸನಿಹ. ನಾನು ಕುಕ್ಕಿಕಟ್ಟೆಯವಳೇ ಆಗಿದ್ದರೂ ಇತ್ತೀಚೆಗೆ ನೆಲೆಸಿರುವ ಕಾರಣ ಸುಮತಿ ಈಶ್ವರ ಶೆಟ್ಟಿಗಾರ್ ಇವರನ್ನು ನೋಡಿಲ್ಲ. ಭಾವ ಚಿತ್ರ ನೋಡಿದ್ದು ಮಾತ್ರ. ಏನೋ ಸೆಳೆತ. ಗೌರವ ಹುಟ್ಟಿಸುವ ಮೊಗಾರವಿಂದ. ನಮ್ಮ ಹಿರಿಯ ಮಹಿಳೆಯರೇ ಹಾಗೇ ಅಲ್ವಾ ? ಸರಳ ಸುಂದರಿಯರು. ಒಮ್ಮೆ ನೋಡಿದವರನ್ನು ಮತ್ತೊಮ್ಮೆ ನೋಡ ಬೇಕೆಂಬ ಬಯಕೆ ಉಂಟಾಗದೇ ಇರದು . ಬಹುಶಃ ಅವರ ವೇಷಭೂಷಣವೇ ಬಲು ಚೆಂದ.

ಎಳೆ ವಯಸ್ಸಿನಲ್ಲಿ ಹೇಗಿದ್ದಿರ ಬಹುದು ಇವರು ?. ನನ್ನದೇ ಕಾಲ್ಪನಿಕ ಲೋಕಕೆ ಜಾರಿದಾಗ ಪುಟಿದೆದ್ದ ಸಾಲುಗಳು

ಹೊಳೆವ ಬಳೆಗಳ ತೊಟ್ಟು ಚೆಲುವ ಸೀರೆಯನುಟ್ಟು
ತಲೆ ತುಂಬ ಹೂವು ಮುಡಿದಾಕಿ / ಬಂದಾಗ
ಹೊಲದಾಗ ಹಸಿರು ನಕ್ಕಂತೆ ||

(ಶೋಹ)

ಚಿಕ್ಕ ವಯಸ್ಸಿನಲ್ಲೇ ಮದುವೆ . ಆತ್ರಾಡಿಯ ಈಶ್ವರ ಶೆಟ್ಟಿಗಾರರೊಂದಿಗೆ. ಪತಿಯ ಉದ್ಯೋಗ ಮಹಾರಾಷ್ಟ್ರದ ಮುಂಬಯಿಯಲ್ಲಿ.. ದೂರದ ಊರು . ಮನೆಯ ಮಂದಿಗೆ ಆತಂಕ ಸಹಜ. ಆದರೆ ಸುಮತಿಯಮ್ಮ ಮೃದುವಾದರೂ ದಿಟ್ಟ ಮಹಿಳೆ. ಪತಿಯು ಉದ್ಯೋಗದಿಂದ ನಿವೃತ್ತಿಯಾಗುವ ತನಕ ಮುಂಬಯಿಯಲ್ಲಿ ವಾಸವಾಗಿದ್ದರು. ಮಕ್ಕಳಿಬ್ಬರ ವಿದ್ಯಾಭ್ಯಾಸ ಅಲ್ಲೇ ನಡೆಯಿತು.

ಕುಕ್ಕಿಕಟ್ಟೆಯಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ಸುಮತಿಯಮ್ಮ ತನ್ನ ಪತಿಯ ನಿಧನದ ಬಳಿಕ ಪರ್ಕಳದ ತನ್ನ ಮಗಳ ಮನೆಯಲ್ಲಿ ನೆಲೆಸಿರುವರು. ವಯೋ ಸಹಜ ಆರೋಗ್ಯ ಸಮಸ್ಯೆಗಳಿದ್ದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುವಷ್ಟು ಸಮರ್ಥರು.

ಹಿರಿಯಕ್ಕನ ಬಗ್ಗೆ ಕಿರಿಯ ತಂಗಿ ಹೇಮಲತಾರವರು ಭಾವುಕರಾಗಿ ಹೀಗೆ ನುಡಿಯುವರು – “ಅವರು ಹಿರಿಯಕ್ಕ ಅಲ್ಲ. ನಮಗೆ ತಾಯಿಯಿದ್ದಂತೆ. ಅವರು ಶೋಭಾನೆ ,ಭಜನೆ ಹಾಡುತ್ತಿದ್ದರೆ ಸುತ್ತ ಮೌನ ಆವರಿಸುತ್ತಿತ್ತು. ಕಂಠ ಮಾಧುರ್ಯ ಅಷ್ಟೊಂದು ಸೊಗಸಾಗಿತ್ತು. ಇತರರೊಡನೆ ಅವರು ಬೆರೆಯುತ್ತಿದ್ದ ರೀತಿ ನಮಗೆ ಮಾರ್ಗದರ್ಶನ. ಅಡುಗೆಯಲ್ಲಿ ಎತ್ತಿದ ಕೈ. ಈಗಲೂ ಆಗಾಗ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅಮ್ಮನನ್ನೇ ಕಂಡು ಬಂದಷ್ಟು ಸಂತೋಷ ಆಗುವುದು “.

.

ಹಿರಿಯ ಪುತ್ರಿ ವನಿತಾರನ್ನು ಮಾತಾಡಿಸಿದಾಗ — “ನಮ್ಮಮ್ಮ ಬಹಳ ಮೃದುವಾದ ಮನಸ್ಸಿನ ಸರಳ ವ್ಯಕ್ತಿ. ನೆರೆಹೊರೆಯವರೊಂದಿಗೆ ಬೆರೆಯುತ್ತಿದ್ದ ರೀತಿ ಇತರರಿಗೆ ಮಾದರಿ. ಪಾಕ ಪ್ರವೀಣೆ. ಮನೆಗೆ ಬಂದವರಿಗೆ ಅವರ ಆತಿಥ್ಯ ಬಹಳ ಪ್ರಿಯ. ಬಗೆ ಬಗೆಯ ಖಾದ್ಯ ತಯಾರಿಸುತ್ತಿದ್ದರು. ಹಾಡುವುದರಲ್ಲೂ ಮುಂದು. ಕಸೂತಿ ,ಕರ ಕುಶಲ ಇತ್ಯಾದಿ ಅರಿತಿದ್ದರು. ಅವರ ಮಗಳೆನ್ನುವುದೇ ನನಗೆ ಹೆಮ್ಮೆಯ ಸಂಗತಿ “.

ಕಿರಿಯ ಪುತ್ರಿ ಗಾಯತ್ರಿ ತನ್ನಮ್ಮನ ಬಗ್ಗೆ ಹೀಗೆನ್ನುವರು — ” ಹೃದಯವಂತೆ ನಮ್ಮಮ್ಮ. ಪರೋಪಕಾರಿಯವರು. ತನಗಿಲ್ಲದಿದ್ದರೂ ಪರರಿಗಾಗಿ ಮಿಡಿವ ಮನಸ್ಸು. ಶುಭ ಸಮಾರಂಭಗಳಿದ್ದಾಗ ಪರಿಚಿತರ – ಬಂಧುಗಳ ಮನೆಯಲ್ಲಿ ಅವರು ತಾನೇ ಮುಂದಾಗಿ ನಿಂತು ಅಡುಗೆ ವ್ಯವಸ್ಥೆ ಮಾಡಿದ್ದೂ ಇದೆ. ತನಗೆ ಗೊತ್ತಿರುವ ವಿಶೇಷ ಅಡುಗೆಗಳನ್ನು ಇತರರಿಗೆ ಕಲಿಸಿದ್ದೂ ಇದೆ. ಭಜನೆ – ಶೋಭಾನೆ ಅವರಿಂದ ಕಲಿತವರು ಬಹಳಷ್ಟು ಮಂದಿ. ಅಪ್ಪನಿಗೆ ಎದುರಾಡಿದ್ದು ಕಂಡಿಲ್ಲ .ಹೊಂದಿ ಬದುಕಿದ್ದರು. ಅವರಿಬ್ಬರ ದಾಂಪತ್ಯ ಅಚ್ಚರಿ ಹುಟ್ಟಿಸುವಂಥದ್ದು.”

ನಾವೂ ಏನಾದರೂ ಅಕ್ಕನ ಬಗ್ಗೆ ಹೇಳ ಬೇಕು ಮುಂಬಯಿಯಲ್ಲಿ ನೆಲೆಸಿರುವ ತಂಗಿಯರಿಬ್ಬರ ಸಂದೇಶ. ಸರಿ ಎಂದೆ. ಜಯಂತಿ ಮತ್ತು ಯಶೋಧಾ ಇಬ್ಬರೂ ತಮ್ಮ ವಿದ್ಯಾಭ್ಯಾಸದ ಬಳಿಕ ಉದ್ಯೋಗ ಹುಡುಕಿಕೊಂಡು ಹೋದದ್ದಹ ಮುಂಬಯಿಯಿಗೆ. ಬಹುಶಃ ಹಿರಿಯಕ್ಕ – ಭಾವನ ಮೇಲಿದ್ದ ಪ್ರೀತಿ ಭರವಸೆ ಕಾರಣ ಇರ ಬಹುದು.

  • ಅಕ್ಕನೆಂದರೆ ಆಲದ ಮರ. ಉದ್ಯೋಗಕ್ಕೆ – ಜೀವನಕ್ಕೆ ದಾರಿ ತೋರಿಸಿದವರು. ಅವರ ಕಾರಣಕ್ಕೆ ನಾವಿಷ್ಟು ಎತ್ತರಕ್ಕೆ ಬೆಳೆದಿರುವುದು . ದಾನ ಧರ್ಮದಲ್ಲಿ ಎತ್ತಿದ ಕೈ . ಯಾವ ಕಾಯಕವನ್ನಾದರೂ ಸುಲಭದಲ್ಲಿ ಗ್ರಹಿಸ ಬಲ್ಲವರು. ” ತಂಗಿ ಜಯಂತಿಯವರ ಹೇಳಿಕೆ.

ನಾಲ್ಕನೆಯ ತಂಗಿ ಯಶೋದಾ ರಮೇಶ ” ಸುಮತಿಯಕ್ಕ ಅಲ್ಲ ಅವರು ಸುಮತಿಯಮ್ಮ . ನಾನು , ನನ್ನಕ್ಕ ಜಯಂತಿ ,ಅಣ್ಣ ದಿವಂಗತ ಶಿವರಾಮ್ – ನಾವು ಮುಂಬಯಿಯಲ್ಲೇ ನೆಲೆ ಕಂಡುಕೊಳ್ಳುವಂತಾಗಿದ್ದು ಸುಮತಿಯಕ್ಕ – ಭಾವನವರಲ್ಲಿ ಇದ್ದ ಔದಾರ್ಯತೆಯಿಂದ. ಮುಂಬಯಿಯಲ್ಲಿ ನರ್ಸಿಂಗ್ ಕಲಿಯುತ್ತಿರುವಾಗ ನನ್ನ ಸ್ನೆಹಿತೆಯರಿಗೂ ಇವರು ಅಚ್ಚು ಮೆಚ್ಚಿನ ಅಕ್ಕ. ಅನಿವಾರ್ಯ ಕಾರಣದಿಂದ ಹಾಸ್ಟೆಲ್ ನಲ್ಲಿ ನಿಲ್ಲ ಬೇಕಾದ ಸಂದರ್ಭದಲ್ಲಿ ಅಕ್ಕನ ಮನೆಗೆ ಬರುವುದನ್ನು ತಪ್ಪಿಸಿರಲಿಲ್ಲ . ಅಕ್ಕನ ಬಗ್ಗೆ ಹೇಳ ಹೊರಟರೆ ಒಂದು ಕಾದಂಬರಿಯೇ ರಚನೆಯಾಗ ಬಹುದು ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವರು.

ಶಾಂತ ಎನ್ನುವವರು ಎರಡನೆಯವರಾಗಿದ್ದು , ದಿವಂಗತ ವೇದಾವತಿಯವರು ನಾಲ್ಕನೆಯವರು.

ಇಷ್ಟು ಸಾಕಷ್ಟಾಯಿತು. ಇನ್ನೂ ಹೆಚ್ಚಿನ ಮಾಹಿತಿ ಸಿಗಲಿಲ್ಲ.
ಶ್ರೀ ದೇವರು ಒಳ್ಳೆಯ ಆರೋಗ್ಯ ನೀಡಿ ಕಾಪಾಡಲಿ. ಶರಣು ತಾಯಿ

ಸಹಕಾರ : ಶ್ರೀಮತಿ ಹೇಮಲತಾ ಕೆಳಾರ್ಕಳಬೆಟ್ಟು
ಲೇಖನ ತಯಾರಿ : ಶ್ರೀಮತಿ ಶೋಭಾ ಹರಿಪ್ರಸಾದ

Bhavani Caterers
Bhavani Caterers
Ads
Ads
Ads
Ads

About the Author

padmashali

Administrator

View All Posts

Post navigation

Previous: ಸೈಬರ್ ಭದ್ರತೆಗಾಗಿ ಸಂಚಾರ್ ಸಾಥಿ ಅಪ್ಲಿಕೇಶನ್ ಬಳಸಿ
Next: ಶ್ರೀ ವೀರಭದ್ರ ಯಕ್ಷಗಾನ ಕಲಾಮಂಡಳಿ, ಕಿನ್ನಿಮೂಲ್ಕಿ ಉಡುಪಿ ಇವರ 16 ನೇ ವಾರ್ಷಿಕೋತ್ಸವ ಹಾಗು ಯಕ್ಷಗಾನ ಬಯಲಾಟ – “ಪಂಚವಟಿ”

Related Stories

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.