Skip to content
ಪದ್ಮಶಾಲಿ ಮಹಾಸಭಾ

ಪದ್ಮಶಾಲಿ ಮಹಾಸಭಾ

Website-HeaderBanner

Connect with Us

  • Facebook
  • Twitter
  • Instagram
  • Youtube
  • Linkedin
  • Whatsapp
Primary Menu
  • ಮುಖಪುಟ
  • ಮಹಾಸಭಾ
  • ವಿದ್ಯಾವರ್ಧಕ
  • ದೇವಸ್ಥಾನಗಳು
    • ಬಾರಕೂರು
    • ಮಂಗಳೂರು
    • ಸಾಲಿಕೇರಿ
    • ಕಲ್ಯಾಣಪುರ
    • ಹಳೆಯಂಗಡಿ
    • ಸುರತ್ಕಲ್ಲು
    • ಸಿದ್ಧಕಟ್ಟೆ
    • ಮುಲ್ಕಿ-ಮಾನಂಪಾಡಿ
    • ಎರ್ಮಾಳ್
    • ಕಿನ್ನಿಮುಲ್ಕಿ
    • ಕಾರ್ಕಳ
    • ಕಾಪು
    • ಪಡುಬಿದ್ರಿ
    • ಉಳ್ಳಾಲ
    • ಕಾಙಂಗಾಡ್
    • ಬಂಗ್ರಮಂಜೇಶ್ವರ
  • ಪದ್ಮಲೇಖ
  • ವೇದಿಕೆಗಳು
    • ಧಾರ್ಮಿಕ ವೇದಿಕೆ
    • ಕ್ರೀಡಾ ವೇದಿಕೆ
    • ನೇಕಾರ ವೇದಿಕೆ
    • ಪರಿಣಯ ವೇದಿಕೆ
    • ಮಹಿಳಾ ವೇದಿಕೆ
    • ಯುವ ವೇದಿಕೆ
    • ತಂತ್ರಜ್ಞಾನ ಸಮಿತಿ
  • ಸಹ ಸಂಘಟನೆಗಳು
    • ಮುಂಬಯಿ
    • ಬೆಂಗಳೂರು
    • ಯುಎಇ
  • ಸದಸ್ಯತ್ವ
  • ಉದ್ಯೋಗ ಮಾಹಿತಿ
  • ವಾರ್ತೆಗಳು
  • Home
  • ಸಹ ಸಂಘಟನೆಗಳು
  • ಪದ್ಮಶಾಲಿ ಸಮಾಜ ಸೇವಾ ಸಂಘ – ಮುಂಬಯಿ
  • ಮುಂಬಯಿ
  • ಸಹ ಸಂಘಟನೆಗಳು

ಪದ್ಮಶಾಲಿ ಸಮಾಜ ಸೇವಾ ಸಂಘ – ಮುಂಬಯಿ

padmashali January 1, 2025 1 minute read
Mumbai-1
Share with your family and friends

Loading

ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಹೊಟ್ಟೆಪಾಡಿಗಾಗಿ ಮುಂಬಯಿ ಸೇರಿದ ದಕ್ಷಿಣ ಕನ್ನಡದ ಪದ್ಮಶಾಲಿ ಬಂಧುಗಳು 1935ರ ಸುಮಾರಿಗೆ ಒಗ್ಗಟ್ಟು ಮತ್ತು ಶಿಕ್ಷಣಾಭಿವೃದ್ಧಿಯ ಧ್ಯೇಯದೊಂದಿಗೆ ಎಂಟು ಮಂದಿಯ ಕಾರ್ಯನಿರ್ವಾಹಕ ಸಮಿತಿಯಿಂದ “ಪದ್ಮಶಾಲಿಗರ ಸಾಮಾಜಿಕ ಸಂಘ” ಎಂಬ ನಾಮದಿಂದ ಸಂಸ್ಥೆಯೊAದನ್ನು ಆರಂಭಿಸಿದರು.

ಈ ಸಂಘದಿAದ ಮೊತ್ತಮೊದಲಿಗೆ 1938ರಲ್ಲಿ ವಿದ್ಯಾರ್ಥಿವೇತನ ರೂಪದಲ್ಲಿ ರೂ.50ನ್ನು ದೇರೆಬೈಲು ಸೇಸಪ್ಪ ಶೆಟ್ಟಿಗಾರರಿಗೆ ನೀಡಲಾಯಿತು. 1940 ರಲ್ಲಿ ಸಂಘದ ಸದಸ್ಯರಿಂದ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಸ್ಥಾಪನೆಗೊಂಡಿತು. ತದನಂತರ 1942 ರಲ್ಲಿ ಇಂಜಿನಿಯರ್ ವಿದ್ಯಾರ್ಥಿ
ದಯಾನಂದ ಕೊಂಚಾಡಿಯವರಿಗೆ ವಿದ್ಯಾರ್ಥಿವೇತನ ನೀಡಿ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು.

ದೇಶದ ಸ್ವಾತಂತ್ರ‍್ಯ ಹೋರಾಟ ತೀವ್ರವಾಗುತ್ತಿದ್ದಂತೆ ಸಂಘವು 12-01-1943 ರಂದು ತನ್ನದೇ ಆದ ಧ್ವಜ ಮತ್ತು ಲಾಂಛನವನ್ನು ಸ್ವೀಕರಿಸಿ, ಕೇಸರಿ ಬಣ್ಣದ ಹಿನ್ನೆಲೆಯಲ್ಲಿ ರಾಟೆ ತಾವರೆ ಹಾಗೂ ತಾವರೆಯಿಂದ ಹೊರಡುವ ನೂಲು ಈ ಲಾಂಛನದಲ್ಲಿ ಮೂಡಿಬಂತು. 1944 ರಲ್ಲಿ ಸಂಘದ
ಹೆಸರನ್ನು `ಪದ್ಮಶಾಲಿ ಸಮಾಜ ಸೇವಾ ಸಂಘ’ ಎಂಬುದಾಗಿ ಬದಲಾಯಿಸಲಾಯಿತು. 27-03-1953 ರಂದು ಸಂಘಕ್ಕೆ ನೋಂದಣಿ ಪ್ರಮಾಣಪತ್ರ ದೊರಕಿತು.

09-07-1950 ರಂದು ಸಂಘದ ಬಂಡವಾಳ ವೃದ್ಧಿಸುವ ಸಲುವಾಗಿ ಸೆಂಟ್ರಲ್ ಥಿಯೇಟರ್‌ನಲ್ಲಿ `ಚಂದ್ರಲೇಖಾ’ ಚಿತ್ರ ಪ್ರದರ್ಶನ ಜರಗಿಸಲಾಯಿತು 1955ರಲ್ಲಿ ಮುಂಬಯಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ನಿರ್ಣಯ ಕೈಗೊಳ್ಳಲಾಯಿತು. 1961ರಲ್ಲಿ ಎ.ಬಿ. ಶೆಟ್ಟಿಗಾರರ ಅಧ್ಯಕ್ಷತೆಯಲ್ಲಿ ರಜತ ಮಹೋತ್ಸವ ಸಮಿತಿ ರಚನೆಯಾಯ್ತು ಮತ್ತು ಪದ್ಮಶಾಲಿ ಗಾರ್ಡ್ಸ್ ಅಸ್ತಿತ್ವಕ್ಕೆ ಬಂತು. 31-01-1962ರಲ್ಲಿ ಕವಾಸಜೆ ಜಹಂಗೀರ್ ಹಾಲ್‌ನಲ್ಲಿ ರಜತಜಯಂತಿಯನ್ನು ಆಚರಿಸಲಾಯಿತು

1973 ವರ್ಷದಿಂದ ಶೃಂಗೇರಿ ಗುರುಪೀಠಕ್ಕೆ ಗುರುಕಾಣಿಕೆ ಕಳುಹಿಸುವ ನಿರ್ಧಾರ ಮಾಡಲಾಯಿತು. 1974ರಿಂದ ಸದಸ್ಯರ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯ ಗುಣಗಳ ಆಧಾರದ ಮೇಲೆ ಬಹುಮಾನ ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು. 22-12-1974ರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ 12 ಸದಸ್ಯರನ್ನೊಳಗೊಂಡ ಪದ್ಮಶಾಲಿ ಎಜುಕೇಶನ್ ಫಂಡ್ ಸಂಸ್ಥೆಯು ಸ್ಥಾಪನೆಗೊಂಡಿತು. 02-03-1975ರಂದು ಈ ಫಂಡಿನ ಬAಡವಾಳಕ್ಕಾಗಿ ಶಣ್ಮುಖಾನಂದ ಹಾಲಿನಲ್ಲಿ ಪ್ರದರ್ಶನಗೊಂಡ ಯೋಗೇಂದ್ರ ದೇಸಾಯಿಯವರ “ಸಂತಸಖೂ” ನೃತ್ಯ ನಾಟಕದಿಂದ ರೂ.75,000/- ದ ಧನಸಂಗ್ರಹ ಮಾಡಲಾಯಿತು. ತದನಂತರದಲ್ಲಿ ಪದ್ಮಶಾಲಿ ಎಜುಕೇಶನ್ ಫಂಡ್ ‘ಪದ್ಮಶಾಲಿ ಎಜುಕೇಷನ್ ಸೊಸೈಟಿ’ ಯಾಗಿ ಬದಲಾಯಿಸಲ್ಪಟ್ಟಿತು.

15-08-1975ರಂದು ಅಂಧೇರಿಯ ಕೋಲ್‌ಡೊಂಗ್ರಿಯಲ್ಲಿ ಜಂಭೂದರ್ಶನ ಸೊಸೈಟಿಯಲ್ಲಿ ಸಂಘದ ನೂತನ ಕಛೇರಿ ಸತ್ಯನಾರಾಯಣ ಪೂಜೆಯೊಂದಿಗೆ ಉದ್ಘಾಟನೆಗೊಂಡಿತು. ಒಟ್ಟು 12 ಮಂದಿ ವಿದ್ಯಾರ್ಥಿಗಳಿಗೆ ಉಳಕೊಳ್ಳುವ ಅನುಕೂಲತೆಯನ್ನು ಈ ಕಛೇರಿಯಲ್ಲಿ ಮಾಡಲಾಯಿತು. 16-02-1976ರಂದು ಪದ್ಮಶಾಲಿ ಎಜುಕೇಶನ್ ಸೊಸೈಟಿ ನೋಂದಣಿಗೊAಡಿತು. 23-08-1987ರಂದು ಸಂಘದ ಸುವರ್ಣಮಹೋತ್ಸವವನ್ನು ಷಣ್ಮುಗಾನಂದ ಸಭಾಗೃಹದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ “ಸುವರ್ಣಪದ್ಮ” ಸಂಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಿಕ 26-01-1988 ರಂದು ಪದ್ಮಶಾಲಿ ಮಹಿಳಾ ಬಳಗ ಮುಂಬಯಿ ಇದರ ಸ್ಥಾಪನೆಯಾಯಿತು.

28-12-1997ರಂದು ಸಂಘದ ವಜ್ರಮಹೋತ್ಸವ “ಗಾಲ ಆಡಿಟೋರಿಯಂ” ಸಾಂತಕ್ರೂಝ್, ಇಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.
ಈ ಸಂಧರ್ಭದಲ್ಲಿ “ವಜ್ರಜ್ಯೋತಿ” ಎಂಬ ಸಂಸ್ಮರಣಸAಚಿಕೆಯನ್ನು ಬಿಡುಗಡೆ ಮಾಡಲಾಯಿತು. 22-08-1997ರಿಂದ ಶ್ರೀವೀರಭದ್ರ ಮಹಮ್ಮಾಯಿ ವಾರ್ಷಿಕ ಮಹಾಪೂಜೆಯನ್ನು ಪ್ರಾರಂಭಿಸಲಾಯಿತು.

30-12-2001ರAದು ಸೊಸೈಟಿಯ ರಜತಮಹೋತ್ಸವವನ್ನು “ಗಾಲ ಆಡಿಟೋರಿಯಂ” ಸಾಂತಕ್ರೂಝ್, ಇಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಈ ಸಂಧರ್ಭದಲ್ಲಿ ನಮ್ಮ ಸಮಾಜದ ಪ್ರಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿಯವರಿಂದ “ರಜತರಶ್ಮಿ” ಸಂಸ್ಮರಣಾ ಸಂಚಿಕೆ ಬಿಡುಗಡೆಗೊAಡಿತು.

25ನೇ ಡಿಸಂಬರ್ 2011 ರಂದು ಸಂಘದ ಅಮೃತಮಹೋತ್ಸವವನ್ನು “ಗಾಲ ಆಡಿಟೋರಿಯಂ” ಸಾಂತಕೂಝ್, ಇಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಈ ಸಂಧರ್ಭದಲ್ಲಿ “ಪದ್ಮಾಮೃತ” ಸಂಸ್ಮರಣ ಸಂಚಿಕೆಯು ಬಿಡುಗಡೆಗೊಂಡಿತು. 29ನೇ ಡಿಸಂಬರ್ 2013 ರಂದು ಮಹಿಳಾ ಬಳಗದ “ರಜತಮಹೋತ್ಸವ”ವನ್ನು ಮಾಟುಂಗದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ “ರಜತಕಮಲ” ಎಂಬ ಸAಸ್ಮರಣಸAಚಿಕೆಯ ಜೊತೆಗೆ ಬೋಳೂರು ಗಂಗಾಧರ ಶೆಟ್ಟಿ ರಚಿತ “ಶಾಲಿಭಾಷೆ” ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ತದನಂತರ ಡಿಸಂಬರ್ 2015ರಲ್ಲಿ ಸಂಘವು ಮುಂಬಯಿಯ ದೊಂಬಿವಿಲಿಯಲ್ಲಿ ಪದ್ಮಶಾಲಿ ಕಲಾಭವನಕ್ಕಾಗಿ ನಿವೇಶನವನ್ನು ಖರೀದಿಸಿತು.

14-08-2016ರಂದು ಸಂಘದ ಎಂಬತ್ತನೆಯ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಬಂಟರ ಭವನ, ಕುರ್ಲಾದಲ್ಲಿ ಆಚರಿಸಲಾಯಿತು. ಈ ಅದ್ದೂರಿ ವಾರ್ಷಿಕೋತ್ಸವವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಸಿ. ಕೊಂಡಯ್ಯನವರು ಉದ್ಘಾಟಿಸಿದರು. ಕಲಾಭವನದ ನಿರ್ಮಾಣ ಕಾರ್ಯಕ್ರಮವನ್ನು ಇನ್ನೊಬ್ಬ ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಸಚಿವೆಯರಾದ ಶ್ರೀಮತಿ ಉಮಾಶ್ರೀಯವರು ಉದ್ಘಾಟಿಸಿದರು. ಹೊರನಾಡು ಕನ್ನಡಿಗರ ಬಗ್ಗೆ ಮತ್ತೊಬ್ಬ ಅತಿಥಿಗಳಾದ ಶ್ರೀ ಎಂ.ಡಿ. ಲಕ್ಷ್ಮೀನಾರಾಯಣರವರು ಚಿಂತನೆ ನಡೆಸಿದರು.


ಎಂಬತ್ತೊAದು ವರ್ಷದ ಕಾಲಾವಧಿಯಲ್ಲಿ ಸಾವಿರಾರು ಸಮಾಜಬಾಂಧವರಿಗೆ ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ನೆರವು ನೀಡಲಾಗಿದೆ.

ಸಮಾಜದ ಯುವಪೀಳಿಗೆಗೆ ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳ ಅರಿವು ಮೂಡಿಸುವ ಸಲುವಾಗಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾರಂಭಗಳನ್ನು ಹಮ್ಮಿಕೊಳ್ಳುವ ಗುರಿಯನ್ನುಹೊಂದಿದೆ.

About the Author

padmashali

Administrator

View All Posts

Post navigation

Next: ದ.ಕ ಪದ್ಮಶಾಲಿ ಸಮಾಜ ಸೇವಾ ಕೂಟ (ರಿ) ಬೆಂಗಳೂರು

Related Stories

Dubai-2
  • ದುಬೈ
  • ಸಹ ಸಂಘಟನೆಗಳು

ಯುಎಇ ಪದ್ಮಶಾಲಿ ಸಮುದಾಯ

padmashali January 1, 2025
Bengaluru-1
  • ಬೆಂಗಳೂರು
  • ಸಹ ಸಂಘಟನೆಗಳು

ದ.ಕ ಪದ್ಮಶಾಲಿ ಸಮಾಜ ಸೇವಾ ಕೂಟ (ರಿ) ಬೆಂಗಳೂರು

padmashali January 1, 2025

ಪದ್ಮಲೇಖ

ಪದ್ಮಲೇಖ

ಕರಾವಳಿ ಕರ್ನಾಟಕದ ಪದ್ಮಶಾಲಿ (ಶೆಟ್ಟಿಗಾರ) ರ ತ್ರೈಮಾಸಿಕ ಪತ್ರಿಕೆ

Trending News

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ WhatsApp-Image-2025-06-30-at-9.49.05-AM.jpeg?fit=651%2C475&ssl=1 1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

June 30, 2025
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image 2
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway 3
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas 4
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs 5
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Posts Slider

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

padmashali April 20, 2025 1
Indian Railway
  • Jobs
  • News

Jobs – Assistant Loco Pilot (ALP) – 9900 posts in Railways

padmashali April 9, 2025
srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

padmashali April 9, 2025
IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

padmashali April 5, 2025

Express Posts List

WhatsApp-Image-2025-06-30-at-9.49.05-AM.jpeg?fit=651%2C475&ssl=1
  • News
  • ಸಾಧಕರು

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

padmashali June 30, 2025
Share with your family and friends ಸಾಲಿಕೇರಿಯ ದಿ. ಪದ್ಮನಾಭ ಶೆಟ್ಟಿಗಾರ್ ಮತ್ತು ಶ್ರೀಮತಿ ರೇವತಿ ಶೆಟ್ಟಿಗಾರ್ ಇವರ ದ್ವಿತೀಯ ಸುಪುತ್ರ...
Read More Read more about ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ  image
  • News

ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 

April 20, 2025 1
Jobs – Assistant Loco Pilot (ALP) – 9900 posts in Railways Indian Railway
  • Jobs
  • News

Jobs – Assistant Loco Pilot (ALP) – 9900 posts in Railways

April 9, 2025
ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ srinivas
  • News
  • ಬಾರಕೂರು

ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ

April 9, 2025
Jobs – IDBI Bank – Specialist Cadre Officers – 119 Posts IDBI-Jobs
  • Jobs
  • News

Jobs – IDBI Bank – Specialist Cadre Officers – 119 Posts

April 5, 2025

Recent Posts

  • ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
  • ಹರ್ಷ ಪ್ರಾಪರ್ಟೀಸ್ – ಶಿಲಾನ್ಯಾಸ ಮತ್ತು ಭೂಮಿ ಪೂಜೆ 
  • Jobs – Assistant Loco Pilot (ALP) – 9900 posts in Railways
  • ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಆಯ್ಕೆ
  • Jobs – IDBI Bank – Specialist Cadre Officers – 119 Posts
  • ಉಡುಪಿಯಲ್ಲಿ ದೇವರ ದಾಸಿಮಯ್ಯ ಜಯಂತಿ 
  • Jobs – Staff Selection Commission

Tags

Blood Donation Mahasabha Padmashali ಮಹಾಸಭಾ ಮುಲ್ಕಿ ರಕ್ತದಾನ ಶಿಬಿರ

Categories

Advertisements Jobs News ಕಲ್ಯಾಣಪುರ ಕಿನ್ನಿಮುಲ್ಕಿ ಕ್ರೀಡಾ ವೇದಿಕೆ ತಂತ್ರಜ್ಞಾನ ಸಮಿತಿ ತೊಂಬತ್ತು ವಸಂತ ದುಬೈ ದೇವಸ್ಥಾನಗಳು ಧಾರ್ಮಿಕ ವೇದಿಕೆ ನೇಕಾರ ವೇದಿಕೆ ಬಂಗ್ರಮಂಜೇಶ್ವರ ಬಾರಕೂರು ಬೆಂಗಳೂರು ಮಹಿಳಾ ವೇದಿಕೆ ಮುಂಬಯಿ ಮುಲ್ಕಿ-ಮಾನಂಪಾಡಿ ಯುವ ವೇದಿಕೆ ಲೇಖನಗಳು ವೇದಿಕೆಗಳು ಸಹ ಸಂಘಟನೆಗಳು ಸಾಧಕರು ಸಾಲಿಕೇರಿ ಸೃಜನಶೀಲತೆ

Meta

  • Log in
  • Entries feed
  • Comments feed
  • WordPress.org
  • Facebook
  • Twitter
  • Instagram
  • Youtube
  • Linkedin
  • Whatsapp
Copyright © All rights reserved. | MoreNews by AF themes.