![]()
ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.), ಮಂಗಳೂರು ಹಾಗು ದ. ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.), ಉಡುಪಿ ಇದರ ಅಧ್ಯಕ್ಷರು ಹಾಗು ಸರ್ವ ಪದಾಧಿಕಾರಿಗಳ ವತಿಯಿಂದ ಸಮಾಜದ ಪ್ರತಿಭೆ ಯಶ್ವಿನ್ ಕೆ. ಶೆಟ್ಟಿಗಾರ್ ಇವರಿಗೆ ಅಭಿನಂದನೆಗಳು
ತಂದೆ: ಕೇಶವ್ ಎಸ್.
ತಾಯಿ: ಮಲ್ಲಿಕಾ ಕೆ.
ದೇವಸ್ಥಾನ: ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಮತ್ತು ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ, ಸುರತ್ಕಲ್
2024ರ 3ನೇ ವರ್ಷದ “ಕೋಸ್ಟಲ್ವುಡ್ ಫಿಲ್ಮ್ ಅವಾರ್ಡ್” ಸಮಾರಂಭದಲ್ಲಿ “ರಾಪಟ” ತುಳು ಸಿನಿಮಾದ (ಪ್ರಥಮ ಚಿತ್ರ) ಸಂಕಲನಕ್ಕಾಗಿ ಯಶ್ವಿನ್ ಕೆ. ಶೆಟ್ಟಿಗಾರ್ ಇವರಿಗೆ “BEST EDITOR AWARD” ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಆಸಕ್ತಿ ಮತ್ತು ಪ್ರಶಸ್ತಿ ಪಡೆದ ಕ್ಷೇತ್ರಗಳು: ಚಿತ್ರಕಲೆ, ನಾಟಕ ರಚನೆ, ನಟನೆ, ಯಕ್ಷಗಾನ, ಸಂಕಲನ, ಛಾಯಾಗ್ರಹಣ, ಕಿರುಚಿತ್ರ ರಚನೆ ಮತ್ತು ನಿರ್ದೇಶನ.
ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿಯಿದ್ದು, ಶಾಲಾ-ಕಾಲೇಜುಗಳಲ್ಲಿ ಹಲವಾರು ಬಹುಮಾನ, ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಹಾಗೂ 2017ನೇ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲಿ ಭಾಗವಹಿಸಿ “ಕಲಾಸಿರಿ” ಗೌರವ ಪ್ರಶಸ್ತಿಗಳಿಸಿರುತ್ತಾರೆ, ಅಲ್ಲದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಡ್ರಾಯಿಂಗ್ ಗ್ರೇಡ್ ಹೈಯರ್ ಪರೀಕ್ಷೆಯಲ್ಲಿ ಅತ್ಯುತ್ತಮ (DISTINCTION) ಶ್ರೇಣಿಯನ್ನು ಪಡೆದಿರುತ್ತಾರೆ.
ಸುರತ್ಕಲ್ನ ತ್ರೈರೂಪಿಣಿ ಕಲಾರಂಗ ನಾಟಕ ತಂಡದ ಸದಸ್ಯರಾಗಿದ್ದು, “ಮಗಳ್ ಗಾಯತ್ರಿ” ನಾಟಕವನ್ನು ರಚಿಸಿ, ಹಾಸ್ಯನಟನೆಯಲ್ಲಿ ಮಿಂಚಿ, ಮಾತ್ರವಲ್ಲದೇ ಜಿಲ್ಲೆಯ ಇತರ ಪ್ರಸಿದ್ಧ ನಾಟಕ ತಂಡಗಳಲ್ಲಿಯೂ ಹಾಸ್ಯಕಲಾವಿದನಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಹಲವಾರು ಯಕ್ಷಗಾನ ತಂಡಗಳಲ್ಲಿ ಹವ್ಯಾಸಿ ಕಲಾವಿದನಾಗಿ ಪಾತ್ರ ನಿರ್ವಹಿಸಿರುತ್ತಾರೆ.
ಬಾಲ್ಯದಲ್ಲೇ, ಶಾಲಾ ಕಲಿಕಾ ಸಮಯದಲ್ಲಿ ದೋಸ್ತಿಲು, ಮೊಬೈಲ್ ಬೋಡಾ, ಕೋರೊನ್ಟೈನ್, ದಿ ಗೇಮ್, ಇತ್ಯಾದಿ ಕಿರುಚಿತ್ರಗಳನ್ನು ರಚಿಸಿ, ನಿರ್ದೇಶಿಸಿ, ಮೊಬೈಲ್ನಲ್ಲೇ ಚಿತ್ರೀಕರಿಸಿ, ಸಂಕಲನ ಮಾಡಿ ಎಲ್ಲರ ಪ್ರಶಂಸೆಗಳಿಸಿರುತ್ತಾರೆ.
ಪಿ.ಯು.ಸಿ. ವಿದ್ಯಾಭ್ಯಾಸದ ನಂತರ ಎಡಿಟಿಂಗ್ ಮತ್ತು ಆ್ಯನಿಮೇಶನ್ ನಲ್ಲಿ “ಮಾಸ್ಟರ್ ಡಿಪ್ಲೊಮ” ಪದವಿಯನ್ನು ಅತ್ಯುತ್ತಮ (DISTINCTION) ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ಇದೀಗ ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಂಕಲನಕಾರನಾಗಿ ಸ್ವಂತ ವೃತ್ತಿಯನ್ನು ಆರಂಭಿಸಿ, ರಾಪಟ (ತುಳು), ಕಲ್ಜಿಗ (ಕನ್ನಡ) ಸಿನಿಮಾ ಹಾಗೂ ಸುಮಾರು ಹದಿನೈದಕ್ಕೂ ಹೆಚ್ಚಿನ ಚಲನಚಿತ್ರಗಳಿಗೆ ಸಂಕಲನ ಮತ್ತು ಪ್ರಚಾರ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೇ ಚಿತ್ರನಟ ಕಿಂಗ್ ಆಫ್ ಆಕ್ಷನ್ ಅರ್ಜುನ್ ಕಾಪಿಕಾಡ್ ರವರ ಅವಿಕಾ ಪ್ರೋಡಕ್ಷನ್ಸ್ ನ ಪ್ರಸಿದ್ಧ ಜಾಹೀರಾತುಗಳ ಚಿತ್ರ ಸಂಕಲನವನ್ನು ಕೂಡ ಮಾಡುತ್ತಿದ್ದಾರೆ.
